ಕರ್ನಾಟಕ ರಾಜ್ಯೋತ್ಸವ ದಿನವನ್ನು ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಪ್ರತೀ ವರ್ಷವೂ ಕರಾಳ ದಿನವಾಗಿ ಆಚರಿಸುತ್ತಿದೆ. ಈ ವರ್ಷ ಅಂತಹ ನಾಡ ವಿರೋಧಿ ಧೋರಣೆಗೆ ಕರ್ನಾಟಕ ಸರ್ಕಾರ ಅವಕಾಶ ಕೊಡಬಾರದೆಂದು ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ನಡೆದ ಬೆಳಗಾವಿ ಸಭೆಯಲ್ಲಿ ಕರವೇ ಒತ್ತಾಯಿಸಿತು. ಸರ್ಕಾರದ ಮುಂದೆ ಇದೇ ಪ್ರಸ್ತಾವನೆಯನ್ನು ಕರವೇ ಇಡಲಿದೆ