ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕಾಗಿ ಮುಖ್ಯಮಂತ್ರಿಗಳ ಜೊತೆ ನಡೆದ ಸಭೆಯ ನಂತರದ ಪತ್ರಿಕಾ ಹೇಳಿಕೆ
ಮುಂದೆ ಓದಿ...ಮಾಧ್ಯಮ ವರದಿಗಳು
ಹಿಂದಿನಿಂದಲೂ ಕನ್ನಡಿಗರಿಗೆ ತಮಿಳುನಾಡಿನಿಂದ ಅನ್ಯಾಯವಾಗುತ್ತ ಬಂದಿದೆ ಅನ್ನುವುದಕ್ಕೆ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಕೇಂದ್ರ ಸರಕಾರವನ್ನ ತನ್ನ ತಾಳಕ್ಕೆ ತಕ್ಕಂತೆ ಕುಣಿಸುವ ಮತ್ತು ತನ್ನ ಮೂಗಿನ ನೇರಕ್ಕೆ ನಿರ್ಣಯಗಳನ್ನು ತಗೆದುಕೊಳ್ಳುವ ತಮಿಳುನಾಡು, ಸೌಹಾರ್ದತೆ ಅನ್ನೋ ಪದಕ್ಕೆ ಅರ್ಥ ಗೊತ್ತಿಲ್ಲ ಅನ್ನುವಂತೆ ನಡೆದುಕೊಂಡಿದೆ ಮತ್ತು ಇಂದಿಗೂ ನಡೆದುಕೊಳ್ಳುತ್ತಿದೆ. ಆದರೆ ಇದನೆಲ್ಲ ನಮ್ಮ ಸರಕಾರ ಗಣನೆಗೆ ತಗೆದುಕೊಳ್ಳುತ್ತಿಲ್ಲ. ...
ಮುಂದೆ ಓದಿ...ಕರ್ನಾಟಕದ ನಡೂಗಡ್ಡೆಯಾದ ಹೊಗೇನಕಲ್ ಪ್ರದೇಶವನ್ನು ತಮಿಳುನಾಡು ಅತಿಕ್ರಮವಾಗಿ ಒತ್ತುವರಿ ಮಾಡಿಕೊಂಡಿದೆ. ಅದರ ವಿರುದ್ಧ ನಮ್ಮ ಕಾರ್ಯಕರ್ತರು ಚಾಮರಾಜನಗರದಲ್ಲಿ ದೊಡ್ಡ ಪ್ರತಿಭಟನೆ ನಡೆಸಿದರು. ಇದರ ವರದಿಯನ್ನು ಇಲ್ಲಿ ನೋಡಿ
ಮುಂದೆ ಓದಿ...ಪ್ರೌಢ ಶಿಕ್ಷಣ ವ್ಯವಸ್ಥೆಗೆ ಏಕರೂಪ ಶಿಕ್ಷಣ ನೀತಿಯನ್ನು ರೂಪಿಸಿ, ತೆರೆಮರೆಯಲ್ಲಿ ಹಿಂದಿಯನ್ನು ಹೇರುವ ಹಾಗು ಎಲ್ಲ ರಾಜ್ಯಗಳ ಶಿಕ್ಷಣ ವ್ಯವಸ್ಥೆಯನ್ನು ತನ್ನ ಕಪಿಮುಷ್ಠಿಯಲ್ಲಿಟ್ಟುಕೊಳ್ಳುವ ಹುನ್ನಾರ ಕೇಂದ್ರ ಸರಕಾರ ನಡೆಸುತ್ತಿದೆ. ಇದನ್ನು ಕ.ರ.ವೇ. ತೀವ್ರವಾಗಿ ವಿರೋಧಿಸುತ್ತದೆ. ಇದರ ವರದಿಯನ್ನು ಇಲ್ಲಿ ನೋಡಿ.
ಮುಂದೆ ಓದಿ...ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯು ನಡೆಸಿದ ಹೋರಾಟ ಮತ್ತು ಕಾರ್ಯಕ್ರಮಗಳ ಫಲವಾಗಿ ಮತ್ತೆ ಬೆಳಗಾವಿಯ ಮಹಾನಗರ ಪಾಲಿಕೆಯ ಮಹಾಪೌರರಾಗಿ ಕನ್ನಡಿಗರೇ ಆಯ್ಕೆಯಾಗಿದ್ದಾರೆ. ಇದು ಕರ್ನಾಟಕ ವಿರೋಧಿಗಳಿಗೆ ತಕ್ಕ ಉತ್ತರ ನೀಡಿದಂತಾಗಿದೆ.
ಮುಂದೆ ಓದಿ...ಎಮ್.ಇ.ಎಸ್. ಜೊತೆ ಕೈ ಜೋಡಿಸಿ ಬೆಳಗಾವಿ ಮಹಾ ನಗರ ಪಾಲಿಕೆ ಕಟ್ಟಡದ ಮೇಲೆ ಎಮ್.ಇ.ಎಸ್. ನ ಬಾವುಟ ಹಾರಿಸಲು ಮುಂದಾದ ಬಿ.ಜೆ.ಪಿ. ಕ್ಕೆ, ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಟಿ.ಏ. ನಾರಾಯಣ ಗೌಡರು ದೇವಮಾಚೋಹಳ್ಳಿಯಲ್ಲಿ ಕ.ರ.ವೇ. ಮಹಿಳಾ ಘಟಕವನ್ನು ಉದ್ಘಾಟಿಸುತ್ತ ಹೇಳಿದರು. ಅದರ ಪತ್ರಿಕಾ ವರದಿಯನ್ನು ಇಲ್ಲಿ ನೋಡಿ:
ಮುಂದೆ ಓದಿ...ಬೆಳಗಾವಿ ಪಾಲಿಕೆ ಮೇಲೆ ಎಮ್.ಇ.ಎಸ್. ನ ಬಾವುಟ ಹಾರಿಸಲು ಮುಂದಾದ ಸಂಸದ ಸುರೇಶ್ ಅಂಗಡಿ ಮತ್ತು ಶಾಸಕ ಸಂಜಯ ಪಾಟೀಲ ರ ವಿರುದ್ಧ, ಮಾರ್ಚ್ ೧೭ ರಂದು ನಮ್ಮ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಅದರ ಪತ್ರಿಕಾ ವರದಿಯನ್ನು ಇಲ್ಲಿ ನೋಡಿ.
ಮುಂದೆ ಓದಿ...2009 ನೆ ಸಾಲಿನ ಬಜೆಟ್ ನಲ್ಲಿ, ತಮಿಳು ನಾಡು ಹೊಗೇನಕಲ್ ಯೋಜನೆಗೆ ಜಪಾನ್ ನಿಂದ ಹಣ ಪಡೆಯಲು ಕೇಂದ್ರ ಸರಕಾರ ಅನುಮೋದನೆ ನೀಡಿತು. ಇದರ ವಿರುದ್ಧ, ನಮ್ಮ ಕಾರ್ಯಕರ್ತರು 16-02-09 ರಂದು ರಾಜ್ಯಾದ್ಯಂತ ಹೋರಾಟ ನಡೆಸಿದರು. ಅದರ ಪತ್ರಿಕಾ ವರದಿಯನ್ನು ಇಲ್ಲಿ ನೋಡಿ.
ಮುಂದೆ ಓದಿ...ಹೊಗೇನಕಲ್ ಮತ್ತು ತಿರುವಳ್ಳವರ್ ಪ್ರತಿಮೆ ವಿಚಾರವಾಗಿ ತಮಿಳುನಾಡಿನ ಮುಖ್ಯಮಂತ್ರಿ ನೀಡಿರುವ ಹೇಳಿಕೆಗೆ ವಿರುದ್ಧವಾಗಿ ಕರವೇ ರಸ್ತೆ ತಡೆ ನಡೆಸಿತು.
ಮುಂದೆ ಓದಿ...ಹೊಗೇನಕಲ್ ಮತ್ತು ತಿರುವಳ್ಳವರ್ ಪ್ರತಿಮೆ ವಿಚಾರವಾಗಿ ತಮಿಳುನಾಡಿನ ಮುಖ್ಯಮಂತ್ರಿಗಳು ನೀಡಿರುವ ಹೇಳಿಕೆಯ ವಿರುದ್ಧ ಕರವೇ ತಮಿಳುನಾಡಿಗೆ ಹೋಗುವ ರೈಲುಗಳನ್ನು ತಡೆದು ಪ್ರತಿಭಟಿಸಿತು.
ಮುಂದೆ ಓದಿ...