ಕರ್ನಾಟಕ ರಕ್ಷಣಾ ವೇದಿಕೆಯ ಹತ್ತು ವರ್ಷಗಳ ಪಯಣದ ಅನುಭವ, ಹೋರಾಟಗಳು, ಯಶಸ್ಸುಗಳ ದಶಮಾನೋತ್ಸವ ಕಾರ್ಯಕ್ರಮವು ಜೂನ್ 22 ಮತ್ತು 23 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಾವಿರಾರು ಕನ್ನಡಿಗರು ಮತ್ತು ನಾಡಿನ ಅನೇಕ ಗಣ್ಯರ ಸಮ್ಮುಖದಲ್ಲಿ ನಡೆಯಿತು. ಜಾನಪದ ಸಂಭ್ರಮದೊಂದಿಗೆ ಅದ್ದೂರಿಯಾಗಿ ಆರಂಭವಾದ ಸಮಾವೇಶವು, ವಿಚಾರಗೋಷ್ಠಿಗಳು ಮತ್ತು ಸಮಾವೇಶದ ನಿರ್ಣಯಗಳೊಂದಿಗೆ ಮುಕ್ತಾಯವಾಯಿತು. ಇಡೀ ಕಾರ್ಯಕ್ರಮವನ್ನು ಕುರಿತು ಪ್ರಕಟವಾದ ವಿವಿಧ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ: ದಶಮಾನೋತ್ಸವ ಹಿಂದಿನ ದಿನವಾದ ಜೂನ್ 21 ರಂದು ಕರವೇ ರಾಜ್ಯಾಧ್ಯಕ್ಷರಾದ ಶ್ರೀ ನಾರಾಯಣಗೌಡರು ಪತ್ರಿಕಾಗೋಷ್ಠಿ ನಡೆಸಿದರು. ಆ ಸಂದರ್ಭದಲ್ಲಿ ನೀಡಿದ ಸಂದರ್ಶನದ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:
ರಾಜ್ಯಾಧ್ಯಕ್ಷರು ಪತ್ರಿಕಾ ಗೋಷ್ಠಿಯಲ್ಲಿ ನೀಡಿದ ಸಂದರ್ಶನದ ವರದಿ
ಸಮಾವೇಶದ ಆರಂಭದ ದಿನವಾದ ಜೂನ್ 22 ರಂದು, ಜಾನಪದ ಸಂಭ್ರಮದೊಂದಿಗೆ ಅದ್ದೂರಿಯಾಗಿ ಶುರುವಾದ ದಶಮಾನೋತ್ಸವದ ಕುರಿತು ಪತ್ರಿಕಾ ವರದಿಗಳನ್ನು ಕೆಳಗಿನ ಕೊಂಡಿಯಲ್ಲಿ ನೋಡಿ:
ದಶಮಾನೋತ್ಸವದ ಮೊದಲ ದಿನದ ವರದಿ ಸಮಾವೇಶದ ಕೊನೆಯ ದಿನವಾದ ಜೂನ್ 23 ರಂದು ರಾಷ್ಟ್ರೀಯ ವಿಚಾರಗೋಷ್ಠಿ ನಡೆಸಲಾಯಿತು. ಗೋಷ್ಠಿಯಲ್ಲಿ ಕರ್ನಾಟಕದ ನೆಲ-ಜಲ ಸಮಸ್ಯೆಗಳು, ರಾಜಕೀಯ ಸಮಸ್ಯೆಗಳು, ರೈತ ಮತ್ತು ದಲಿತ ಚಳುವಳಿಗಳು.. ಇತ್ಯಾದಿ ಗಂಭೀರ ವಿಚಾರಗಳ ಬಗ್ಗೆ ಹಲವು ವಿದ್ವಾಂಸರು ಮತ್ತು ರಾಜಕೀಯ ಧುರೀಣರು ಮಾತನಾಡಿದರು. ಈ ಕುರಿತು ಪ್ರಕಟವಾದ ಪತ್ರಿಕಾ ವರದಿಗಳನ್ನು ಕೆಳಗಿನ ಕೊಂಡಿಯಲ್ಲಿ ನೋಡಿ:
|