ಬೆಳಗಾವಿಯಲ್ಲಿ ನೆಲೆಕಳೆದು ಕೊಳ್ಳುತ್ತಿರುವ ಎಮ್.ಇ.ಎಸ್ ನ ಒತ್ತಡಕ್ಕೆ ಮಣಿದ ಸರ್ಕಾರ ಅಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎ.ಪಿ.ಎಮ್.ಸಿ)ಗೆ ಎಮ್.ಇ.ಎಸ್ ಸದಸ್ಯನ ನಾಮ ನಿರ್ದೇಶನ ಮಾಡಿತು. ಈ ಕ್ರಮವನ್ನು ವಿರೋಧಿಸಿ ಕ.ರ.ವೇ ಉಗ್ರರೂಪದ ಪ್ರತಿಭಟನೆ ನಡೆಸಿತು. ಪ್ರತಿಭಟನೆ ನಡೆದ ಕೆಲವೆ ಘಂಟೆಗಳಲ್ಲಿ ಸರ್ಕಾರವು ತನ್ನ ಆದೇಶವನ್ನು ಹಿಂಪಡೆದು ಹಿಂದೆಯಿದ್ದ ಕನ್ನಡಿಗ ಸದಸ್ಯನನ್ನೆ ಮುಂದುವರೆಸಲು ಆದೇಶ ಹೊರಡಿಸಿತು. ಇದರಿಂದ ಎ.ಪಿ.ಎಮ್.ಸಿ ಚುನಾವಣೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನವನ್ನು ಕಬಳಿಸಲು ಯತ್ನಿಸಿದ ಎಮ್.ಇ.ಎಸ್ ಗೆ ಮುಖಭಂಗವಾಯಿತು. ಇದು ಕನ್ನಡಿಗರಿಗೆ ಸಂದ ಜಯವಾಗಿದೆ.
ಪ್ರತಿಭಟನಾನಿರತ ಕಾರ್ಯಕರ್ತರು
ವಿಜಯೋತ್ಸವ ಆಚರಣೆ |