ಜನವರಿ 2008 ರಲ್ಲಿ ಗ್ರೂಪ್ ಡಿ ಹುದ್ದೆಗಳಿಗಾಗಿ ನಡೆದ ರೈಲ್ವೆ ನೇಮಕಾತಿಯಲ್ಲಿ ಬಹುಪಾಲನ್ನು ಕನ್ನಡೇತರರಿಗೆ ನೀಡುವ ಸೂಚನೆಯಿತ್ತು. ಅ ನೇಮಕಾತಿಯನ್ನು ವಿರೋಧಿಸಿ, ಕ.ರ.ವೇ ಹೋರಾಟವನ್ನು ನಡೆಸಿ ಕನ್ನಡಿಗರಿಗೆ ಆಗುತ್ತಿದ್ದ ಅನ್ಯಾಯವನ್ನು ತಪ್ಪಿಸಿತ್ತು. ಈಗ ಮತ್ತೆ ಅದೇ ಗ್ರೂಪ್ ಡಿ ಹುದ್ದೆಗಳಿಗೆ ರೈಲ್ವೆ ಇಲಾಖೆ ನೇಮಕಾತಿ ನಡೆಸಲು ಸಜ್ಜಾಗಿದೆ.
ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ೪೭೦೦ ಗ್ರೂಪ್ ಡಿ ಹುದ್ದೆಗಳನ್ನು ಕನ್ನಡಿಗರಿಗೇ ಕೊಡಬೇಕೆಂದು ಆಗ್ರಹಿಸಿ, ಇಂದು ಅಂದರೆ; ೧೫ ಅಕ್ಟೋಬರ್ ೨೦೦೮ ರಂದು ಬೆಂಗಳೂರಿನಲ್ಲಿ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜಾಥಾವನ್ನು ಹಮ್ಮಿಕೊಂಡಿದ್ದೆವು. ಇದೇ ಸಮಯದಲ್ಲಿ ಬೆಂಗಳೂರಿನಲ್ಲಿ ಗೃಹ ಮಂತ್ರಿ ವಿ.ಎಸ್. ಆಚಾರ್ಯರವರನ್ನು ಭೇಟಿ ಮಾಡಿ ಮನವಿ ಪತ್ರವನ್ನು ನೀಡಿದೆವು.

ಪತ್ರಿಕಾ ವರದಿಗಳನ್ನು ಇಲ್ಲಿ ನೋಡಿ
|