ಎಂ.ಇ.ಎಸ್. ಮತ್ತೆ ತಗಾದೆ ತೆಗೆದಿದೆ. ಬೆಳಗಾವಿಯಲ್ಲಿ ನಡೆವ ವಿಶೇಷ ಅಧಿವೇಶನಕ್ಕೆ ಪರ್ಯಾಯವಾಗಿ ಮರಾಠಿ
ಮಹಾ ಮೇಳಾವ ನಡೆಸಲು ಮುಂದಾಗಿದೆ. ಬೆಳಗಾವಿಯನ್ನು ಮಹಾರಾಷ್ಟ್ರ ಕ್ಕೆ ಸೇರಿಸುವ ನಿಟ್ಟಿನಲ್ಲಿ ಈ ಮರಾಠಿ ಮಹಾ ಮೇಳಾವ ಆಯೋಜಿಸಲಾಗಿದೆ. ಇದರ ವಿರುದ್ಧ ನಮ್ಮ ಕ.ರ.ವೇ. ಯ ನೂರಾರು ಕಾರ್ಯಕರ್ತರು ೧೦-೧-೨೦೦೯ ರಂದು ರಾಜ್ಯಾದ್ಯಂತ; ಎಂ.ಈ.ಎಸ್. ನ ನಾಡ ದ್ರೋಹಿ ಕ್ರಮವನ್ನು ಖಂಡಿಸಿದರು ಮತ್ತು ಇಂತಹ ಕರ್ನಾಟಕ ವಿರೋಧಿ ನಿಲುವನ್ನು ಹೊಂದಿರುವ ಮೇಳಕ್ಕೆ ಅನುಮತಿ ಕೊಡಬಾರದೆಂದು ಆಗ್ರಹಿಸಿದರು.